ಶ್ರೀನಿವಾಸ್ ಕಾಲೇಜಿನಲ್ಲಿ “ಕ್ಯಾಂಪಸ್ ಗೇಟ್ ಮೀಟ್” ಅಭಿಯಾನ
ಮಂಗಳೂರು (ಫೆ.01) ದಕ್ಷಿಣ ಕನ್ನಡ ಜಿಲ್ಲಾ NSUI ವತಿಯಿಂದ ‘ಕ್ಯಾಂಪಸ್ ಗೇಟ್ ಮೀಟ್’ ಪೋಸ್ಟರ್ ಅಭಿಯಾನವನ್ನು ಪಾಂಡೇಶ್ವರದ ಶ್ರೀನಿವಾಸ್ ಕಾಲೇಜಿನಲ್ಲಿ ಇಂದು ನಡೆಸಲಾಯಿತು. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ NSUI ನ ಅಧ್ಯಕ್ಷರಾದ ಸವಾದ್ ಸುಳ್ಯ ಹಾಗೂ ಕರ್ನಾಟಕ NSUI ನ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ ರವರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರ ಯುವ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಶೇಖ್ ಅಫ್ಶನ್ ಶ್ರೀನಿವಾಸ್ ಕಾಲೇಜಿನ NSUI ಘಟಕದ ಅಧ್ಯಕ್ಷರಾದ ತಮೀಝ್ ಅಳಕೆಮಜಲು, ಉಡುಪಿ ಜಿಲ್ಲಾ NSUI ನ ಪ್ರಧಾನ ಕಾರ್ಯದರ್ಶಿ ಮಸೂದ್, ದಕ್ಷಿಣ ಕನ್ನಡ ಜಿಲ್ಲಾ NSUI ನ ಸಂಯೋಜಕರಾದ ನಜೀಬ್ ಮಂಚಿ ಶ್ರೀನಿವಾಸ ಕಾಲೇಜಿನ NSUI ಘಟಕದ ಸದಸ್ಯರಾದ ಶ್ರೇಯಸ್, ಅ್ಯಸ್ಟನ್, ದಿವ್ಯ ಪ್ರಜ್ವಲ್, ವಿನೋದ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.