ಜನರ ನೋವಿಗೆ ಸ್ಪಂದಿಸಬೇಕಾದ ಸರಕಾರವೇ ಜನರ ನೋವಿಗೆ ಕಾರಣವಾಗಿರುವುದು ದುರದೃಷ್ಟಕರ : ಶ್ರೀಪ್ರಸಾದ್ ಎನ್
ಪುತ್ತೂರು : (ಫೆ.23) ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಜನತೆ ಕೊರೊನಾ ಮಹಾ ಮಾರಿಯಿಂದ ತತ್ತರಿಸಿ ತನ್ನ ಬದುಕು ಅಸ್ತವ್ಯಸ್ತಗೊಂಡಿರುವಾಗ ಸರಕಾರ ಅವರ ನೋವಿಗೆ ಸ್ಪಂದಿಸಬೇಕಿತ್ತು. ಆದರೆ ಸರಕಾರ ಮಾತ್ರ ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಹೀಗೆ ಬೆಲೆ ಏರಿಕೆ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟದ ಕೂಪಕ್ಕೆ ತಳ್ಳಿದೆ. ಇದು ಸಾಲದೆಂಬಂತೆ ಸರಕಾರ ಇನ್ನೊಂದು ಹೆಜ್ಜೆ ಮುಂದಕ್ಕಿಟ್ಟು ಬಡವರು, ವಿದ್ಯಾರ್ಥಿಗಳ
ಪಾಲಿಗೆ ವರದಾನವಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ಸರಕಾರದ ಯೋಜನೆಯಲ್ಲಿ ಪ್ರಮುಖವಾದ ಇಂದಿರಾ ಕ್ಯಾಂಟಿನ್ ಇದರ ಸಿಬ್ಬಂಧಿಗಳಿಗೆ ವೇತನ ನೀಡದೆ ಇರುವುದರಿಂದ ಇಂದಿರಾ ಕ್ಯಾಂಟಿನ್ ಸಾರ್ವಜನಿಕರಿಗೆ ಸೇವೆ ನೀಡುತ್ತಿಲ್ಲ ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ವಿಷಾಧಕರ. ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸದೆ ಇದ್ದರೆ, ಮುಂದಿನ ದಿನಗಳಲ್ಲಿ ಎ.ಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಎನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿಸಿದ್ದಾರೆ.