ರಾಮ್ ಸೇನಾ ನೂತನ ಎಕ್ಕಾರು ಘಟಕ ಉದ್ಘಾಟನೆ.
ಎಕ್ಕಾರು : (ಜೂ.14) ದ.ಕ ಜಿಲ್ಲಾ ಬಜಪೆ ವಲಯದ ಎಕ್ಕಾರು ರಾಮ್ ಸೇನಾ ಶಿವಾಜಿ ಘಟಕವು ಎಕ್ಕಾರಿನ ಕುಂಭಕಂಠಿಣಿ ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ರಾಮ್ ಸೇನಾ ರಾಜ್ಯ ಪದಾಧಿಕಾರಿಗಳಾದ ಮಂಜುನಾಥ್ ಕುಂದರ್ ಅದ್ಯಪಾಡಿ, ಸಂತೋಷ್ ಶೆಟ್ಟಿ ಓದೂರು, ದಿನೇಶ್ ಎಂ.ಪಿ, ಕಿರಣ್ ವಿ.ಅಮೀನ್, ಪುರುಷೋತ್ತಮ್ ಬಜಪೆ, ಪ್ರವೀಣ್ ಅಡ್ಯಾರ್ ಪದವು, ಎಕ್ಕಾರ್ ಘಟಕದ ಗೌರವಾಧ್ಯಕ್ಷರು ಪ್ರಕಾಶ್ ಎಕ್ಕಾರ್,
ಸೂರಜ್ ಕೊಂಡೇಲ, ಚಂದ್ರಶೇಖರ್ ಸುಂಕದಕಟ್ಟೆ, ಸುರೇಶ್ ಸುಂಕದಕಟ್ಟೆ, ಸುಶೀತ್ ಕಟೀಲ್ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರು ಪ್ರವೀಣ್ ಎಕ್ಕಾರ್, ಉಪಾಧ್ಯಕ್ಷರು ಗಣೇಶ್ ಎಕ್ಕಾರ್, ಪ್ರಧಾನ ಕಾರ್ಯದರ್ಶಿ ನಿತೇಶ್ ಎಕ್ಕಾರ್, ಕಾರ್ಯದರ್ಶಿ ಪ್ರೀತೇಶ್ ಎಕ್ಕಾರ್, ಸಂಘಟನಾ ಕಾರ್ಯದರ್ಶಿ ವಿಜೇತ್ ಎಕ್ಕಾರ್, ಸಾಮಾಜಿಕ ಜಾಲತಾಣ ಸಂಪ್ರೀತ್ ಎಕ್ಕಾರ್. ಸಮೃದ್ಧ ಎಕ್ಕಾರ್ ಮತ್ತು ಹರಿಣಾಕ್ಷಿ ಎಕ್ಕಾರ್ ರವರು ಕಾರ್ಯಕ್ರಮವನ್ನು ನಿರ್ವಹಣೆ ಮಾಡಿ ಯಶಸ್ವಿಗೊಳಿಸಿದರು.