ಬೈಂದೂರು ಕಿರಿಮಂಜೇಶ್ವರದಲ್ಲಿ ನೂತನ ರಾಮ್ ಸೇನಾ ಘಟಕ ಉದ್ಘಾಟನೆ
ಬೈಂದೂರು :(ಜೂ.15) ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ರಾಮ್ ಸೇನಾ ಅಗಸ್ತ್ಯೇಶ್ವರ ಘಟಕ ಲಲಿತಾ ಕೃಷ್ಣ ಕಲಾಮಂದಿರದಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ ರಾಮ್ ಸೇನಾದ ರಾಜ್ಯ ಪದಾಧಿಕಾರಿಗಳಾದ ಮಂಜುನಾಥ್ ಕುಂದರ್, ಸಂತೋಷ್ ಶೆಟ್ಟಿ ಓದೂರು, ದೀಪಕ್ ಮೂಡುಬೆಳ್ಳೆ, ರಾಜೇಶ್ ಶಿರ್ವ, ರಕ್ಷಿತ್ ಮಲ್ಪೆ, ಸುಬ್ರಮಣ್ಯ ಕಿರಿಮಂಜೇಶ್ವರ ಹಾಗೂ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೇಖರ್ ಕಾರ್ವಿ ಉಪಸ್ಥಿತರಿದ್ದರು.
ನೂತನ ಘಟಕದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿವೆ
ಘಟಕದ ಗೌರವಾಧ್ಯಕ್ಷರಾಗಿ ಶ್ರೀ ನಾರಾಯಣ ಹೆಬ್ಬಾರ್, ಅಧ್ಯಕ್ಷರು ಸತೀಶ್ ನಾಯರಿ, ಉಪಾಧ್ಯಕ್ಷರು ಸಂತೋಷ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯರಿ, ಜೊತೆ ಕಾರ್ಯದರ್ಶಿ ಅಚ್ಚುತ್, ಸಂಘಟನಾ ಕಾರ್ಯದರ್ಶಿ ಗೋಪಿ ಚಂದನ್, ಗೋ ರಕ್ಷಕ ಪ್ರಮುಖ್ ದಿನಾಕರ್ ದೇವಾಡಿಗ, ವಿದ್ಯಾರ್ಥಿ ಪ್ರಮುಖ್ ಮನೋಹರ್ ಮೋಗವೀರ ರವರು ಅಯ್ಕೆಗೊಂಡಿದ್ದಾರೆ.