ಹೆಬ್ರಿ ತಾಲ್ಲೂಕು ಚಾರದಲ್ಲಿ ನೂತನ ರಾಮ್ ಸೇನಾ ಘಟಕ ಉದ್ಘಾಟನೆ
ಉಡುಪಿ : (ಜೂ.8) ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಚಾರದಲ್ಲಿ ರಾಮ್ ಸೇನಾ ನೂತನ ಘಟಕ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಶ್ರೀ ದಾಮೋದರ್ ಶರ್ಮ ರವರು ಉದ್ಘಾಟಿಸಿದರು ಹಾಗೂ ರಾಮ್ ಸೇನಾ ಜಿಲ್ಲಾ ಪದಾಧಿಕಾರಿಗಳಾದ ದೀಪಕ್ ಮೂಡುಬೆಳ್ಳೆ, ನವೀನ್ ಶೆಟ್ಟಿ, ದಿನಕರ್ ನಂದಳಿಕೆ ಮತ್ತು ಅಕ್ಷಿತ್ ಹೆಗ್ಡೆ ಹೆಬ್ರಿ ಉಪಸ್ಥಿತರಿದ್ದರು.
ಘಟಕದ ನೂತನ ಅಧ್ಯಕ್ಷರಾಗಿ ವಿರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ಆಶಿಶ್ ಭಂಡಾರಿ, ಕಾರ್ಯದರ್ಶಿಯಾಗಿ ಶರಣ್, ಜೊತೆ ಕಾರ್ಯದರ್ಶಿ ಮಹೇಶ್ ಗಾಣಿಕ, ಗೋ ರಕ್ಷಕ್ ಪ್ರಮುಖ್ ಪ್ರಭಾತ್, ವಿದ್ಯಾರ್ಥಿ ಪ್ರಮುಖ್ ಯತಿರಜ್ ಶೆಟ್ಟಿಯವರು ಅಯ್ಕೆಗೊಂಡಿರುತ್ತಾರೆ.