ಬಂಟ್ವಾಳ ಸಿದ್ದಕಟ್ಟೆಯಲ್ಲಿ ನೂತನ ರಾಮ್ ಸೇನಾ ಘಟಕ ಉದ್ಘಾಟನೆ.
ಬಂಟ್ವಾಳ: (ಜೂ.8) ದಕ್ಷಿಣ ಕನ್ನಡ ಜಿಲ್ಲಾ ಬಂಟ್ವಾಳ ತಾಲೂಕು ಸಿದ್ಧಕಟ್ಟೆಯ ನೂತನ ರಾಮ್ ಸೇನಾ ಚಕ್ರವರ್ತಿ ಘಟಕವು ಸಿದ್ದಕಟ್ಟೆಯ ನಾರಾಯಣಗುರು ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ರಾಮ್ ಸೇನಾ ಸಂಸ್ಥಾಪಕರಾದ ಶ್ರೀ ಪ್ರಸಾದ್ ಅತ್ತಾವರ್, ರಾಜ್ಯ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಒದ್ದೂರು, ದ.ಕ ಜಿಲ್ಲಾ ಗೌರವ ಅಧ್ಯಕ್ಷರಾದ ದಿನೇಶ್ ಎಂ.ಪಿ, ದ.ಕ ಜಿಲ್ಲಾಧ್ಯಕ್ಷರು ಕಿರಣ್ ವಿ ಅಮೀನ್, ಜಿಲ್ಲಾ ಉಪಾಧ್ಯಕ್ಷರಾಗಿರುವ ಹರ್ಷಿತ್ ಪೂಜಾರಿ ಅಡ್ಯಾರ್ ಪದವು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲೋಕೇಶ್ ಸುರತ್ಕಲ್ ಉಪಸ್ಥಿತರಿದ್ದರು.
ನೂತನ ಘಟಕದ ಗೌರವ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಹೇಮಚಂದ್ರ ಸಿದ್ದಕಟ್ಟೆ, ಘಟಕ ಅಧ್ಯಕ್ಷರು ಉದಯ್ ಸಾಲಿಯಾನ್, ಉಪಾಧ್ಯಕ್ಷರು ಅರವಿಂದ ಪೂಂಜಾ, ಪ್ರಧಾನ ಕಾರ್ಯದರ್ಶಿ ಚಂದ್ರ ಕೊರಿಯರ್, ಕಾರ್ಯದರ್ಶಿ ದಿನೇಶ್ ಕುದ್ಕೊಳಿ, ಸಹ ಸಂಘಟನಾ ಕಾರ್ಯದರ್ಶಿ ಕಿಶೋರ್ ಕರ್ಪೆ, ಗೋರಕ್ಷಕ ಸೇನಾ ಸಂಚಾಲಕ ರಾಜೇಶ್ ಉರ್ಬನ,
ಸಹ ಸಂಚಾಲಕ ಶೋಭಿತ್ ಕೆರೆಬಲಿ, ಸಾಮಾಜಿಕ ಜಾಲತಾಣ ಅಕ್ಷಯ್ ಹನ್ನೆರಡುಕವಲು, ಗೌರವ ಸಲಹೆಗಾರರಾಗಿ ದೇವಣ್ಣ ಸಿದ್ಧಕಟ್ಟೆ, ದೇವರಾಜ್ ಮಂಚಕಲ್ಲು, ಪ್ರತೀಕ್ ಅಮೀನ್, ಪ್ರಕಾಶ್ ಮೇಲುಗುಡ್ಡೆ, ರಂಜಿತ್ ಪುಚ್ಛಮೊಗರು ಹಾಗೂ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಣೆ ಮಾಡಿ ಯಶಸ್ವಿಗೊಳಿಸಿದರು.