ಅನಿತ ಹೇಮನಾಥ್ ಶೆಟ್ಟಿ ಜಿ.ಪಂ ಅನುದಾನ : ನನ್ಯದಲ್ಲಿ ಸೋಲಾರ್ ದೀಪ ಲೋಕಾರ್ಪಣೆ
ಪುತ್ತೂರು : (ಡಿ.06) ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ನನ್ಯ ಎಂಬಲ್ಲಿ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಅನಿತ ಹೇಮನಾಥ್ ಶೆಟ್ಟಿ ರವರ ಅನುದಾನದಲ್ಲಿ ಅಳವಡಿಸಿದ ಸೋಲಾರ್ ದೀಪವನ್ನು ಲಯನ್ಸ್ ಗವರ್ನರ್ ರೋನಾಲ್ಡ್ ಗೋಮ್ಸ್ ಲೋಕಾರ್ಪಣೆಗೋಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಹೇಮನಾಥ್ ಶೆಟ್ಟಿ ಕಾವು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತ ಹೇಮನಾಥ್ ಶೆಟ್ಟಿ, ಲ. ಅನಿತ ಗೋಮ್ಸ್, ಲಯನ್ಸ್ ಕಾರ್ಯದರ್ಶಿ ರಮೇಶ್ ರೈ ಸಾಂತ್ಯ, ಖಜಾಂಜಿ ಕೃಷ್ಣಪ್ಪ ಗೌಡ, ಉಪಾಧ್ಯಕ್ಷರಾದ ಶರತ್ ರೈ ಕಾವು, ಸದಸ್ಯರಾದ ಜಯಪ್ರಕಾಶ್ ರೈ ನೂಜಿಬೈಲ್, ಸುಬ್ರಾಯ ಬಲ್ಯಾಯ ಮತ್ತು ಇತರ ಸ್ಥಳೀಯ ಮುಖಂಡರು ಭಾಗವಹಿಸಿದರು.