ಪ್ರಜ್ಞಾ ಕೇಂದ್ರಕ್ಕೆ ಜಿ.ಪಂ ಸದಸ್ಯೆ ಅನಿತ ಹೇಮನಾಥ್ ಶೆಟ್ಟಿ ಭೇಟಿ ಅಗತ್ಯ ವಸ್ತುಗಳಿಗಾಗಿ ಅನುದಾನ
ಪುತ್ತೂರು : (ಡಿ.06) ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿಯವರ ಅನುದಾನದಲ್ಲಿ ₹ 30,000 ಮೊತ್ತದ ವಿವಿಧ ಅಗತ್ಯ ಸಾಮಗ್ರಿಗಳನ್ನು ವಿಶೇಷ ಚೇತನ ಪ್ರಜ್ಞಾ ಕೇಂದಕ್ಕೆ ಲಯನ್ಸ್ ಗವರ್ನರ್ ರೋನಾಲ್ಡ್ ಗೋಮ್ಸ್ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಪುತ್ತೂರು-ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಹೇಮನಾಥ್ ಶೆಟ್ಟಿ, ಜಿ.ಪಂ ಸದಸ್ಯೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿತಾ ಹೇಮನಾಥ್ ಶೆಟ್ಟಿ, ಕಾರ್ಯದರ್ಶಿ ರಮೇಶ್ ರೈ ಸಾಂತ್ಯ, ಖಜಾಂಜಿ ಕೃಷ್ಣಪ್ಪ ಗೌಡ, ಉಪಾಧ್ಯಕ್ಷ ಶರತ್ ರೈ ಕಾವು, ಸದಸ್ಯರಾದ ಜಯಪ್ರಕಾಶ್ ರೈ ನೂಜಿ ಬೈಲ್, ಅನಂತರಾಮ ಮತ್ತು ಇತರರು ಇದ್ದರು.