ಗೋಳಿತ್ತಡಿ ಶಾಲೆಗೆ ಅನಿತ ಹೇಮನಾಥ್ ಶೆಟ್ಟಿ ಭೇಟಿ ಮಕ್ಕಳೊಂದಿಗೆ ಉಭಯ ಕುಶಲೋಪರಿ
ಪುತ್ತೂರು : (ಡಿ.04) ನೆಟ್ಟಣಿಗೆ ಮುಡ್ನೂರ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗೋಳಿತ್ತಡಿ ಶಾಲೆಗೆ ಸ್ಥಳೀಯ ಜಿಲ್ಲಾಪಂಚಾಯತ್ ಸದಸ್ಯೆ, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತ ಹೇಮನಾಥ್ ಶೆಟ್ಟಿ ಭೇಟಿ ನೀಡಿದರು. ಶಾಲೆಗೆ ಸುಣ್ಣ-ಬಣ್ಣ ಬಳಿಯಲು ಜಿಲ್ಲಾ ಪಂಚಾಯತ್ ವತಿಯಿಂದ ಸುಮಾರು 66 ಸಾವಿರ ಅನುದಾನ ಗೋಷಿಸಿದರು ಅಲ್ಲದೇ ವಿದ್ಯಾರ್ಥಿಯರ ಜೊತೆಗೆ ಉಭಯ ಕುಶಲೋಪರಿ ನಡೆಸಿ ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಯ ಶಿಕ್ಷಕಿಯಾಗಿ ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಕರ್ನಾಟಕ ದ ರಾಜ್ಯಪಾಲ, ರಾಜ್ಯದ ಮಖ್ಯಮಂತ್ರಿ ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ ಅನಿತ ಹೇಮನಾಥ್ ಶೆಟ್ಟಿ ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನೆಟ್ಟಣಿಗೆ ಮುಡ್ನೂರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀರಾಮ್ ಪಕ್ಕಳ, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ನಾಯ್ಕ ಮೇನಾಲ, ಅಬ್ದುಲ್ಲಾ ಮೇನಾಲ, ಗೋಳಿತ್ತಡಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಖಾದರ್ ಕಟ್ಟೆಪುಣಿ, ಶಾಲಾ ಪ್ರಭಾರ ಮಖ್ಯೋಪಾಧ್ಯಾಯಿನಿ ವಿಧ್ಯಾಕುಮಾರಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.