ಗೋಳಿತ್ತಡಿ ಶಾಲೆಗೆ ಅನಿತ ಹೇಮನಾಥ್ ಶೆಟ್ಟಿ ಭೇಟಿ ಮಕ್ಕಳೊಂದಿಗೆ ಉಭಯ ಕುಶಲೋಪರಿ

ಪುತ್ತೂರು : (ಡಿ.04) ನೆಟ್ಟಣಿಗೆ ಮುಡ್ನೂರ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗೋಳಿತ್ತಡಿ ಶಾಲೆಗೆ ಸ್ಥಳೀಯ ಜಿಲ್ಲಾಪಂಚಾಯತ್ ಸದಸ್ಯೆ, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ  ಶ್ರೀಮತಿ ಅನಿತ ಹೇಮನಾಥ್ ಶೆಟ್ಟಿ ಭೇಟಿ ನೀಡಿದರು. ಶಾಲೆಗೆ ಸುಣ್ಣ-ಬಣ್ಣ ಬಳಿಯಲು ಜಿಲ್ಲಾ ಪಂಚಾಯತ್ ವತಿಯಿಂದ ಸುಮಾರು 66 ಸಾವಿರ ಅನುದಾನ ಗೋಷಿಸಿದರು ಅಲ್ಲದೇ ವಿದ್ಯಾರ್ಥಿಯರ ಜೊತೆಗೆ ಉಭಯ ಕುಶಲೋಪರಿ ನಡೆಸಿ ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಯ ಶಿಕ್ಷಕಿಯಾಗಿ ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಕರ್ನಾಟಕ ದ ರಾಜ್ಯಪಾಲ, ರಾಜ್ಯದ ಮಖ್ಯಮಂತ್ರಿ ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ ಅನಿತ ಹೇಮನಾಥ್ ಶೆಟ್ಟಿ ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Anitha hemanth shetty
ಈ ಸಂದರ್ಭದಲ್ಲಿ ನೆಟ್ಟಣಿಗೆ ಮುಡ್ನೂರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀರಾಮ್ ಪಕ್ಕಳ, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ನಾಯ್ಕ ಮೇನಾಲ, ಅಬ್ದುಲ್ಲಾ ಮೇನಾಲ, ಗೋಳಿತ್ತಡಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಖಾದರ್ ಕಟ್ಟೆಪುಣಿ, ಶಾಲಾ ಪ್ರಭಾರ ಮಖ್ಯೋಪಾಧ್ಯಾಯಿನಿ ವಿಧ್ಯಾಕುಮಾರಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!