ಜಿ.ಪಂ. ಸದಸ್ಯೆ ಅನಿತ ಹೇಮನಾಥ್ ಶೆಟ್ಟಿಯಿಂದ ಗೋಳಿತ್ತಡಿ ಶಾಲೆಗೆ 1.50 ಲಕ್ಷ ಅನುದಾನ.
ಪುತ್ತೂರು : (ಡಿ.02) ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತು ಕ್ಷೇತ್ರದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತು ವ್ಯಾಪ್ತಿಯ ಕರ್ನಾಟಕ ಕೇರಳ ಗಡಿನಾಡು ಪ್ರದೇಶದ ಗೋಳಿತ್ತಡಿ ಸರಕಾರಿ ಪ್ರಾಥಮಿಕ ಶಾಲೆಗೆ ಕೊಳವೆ ಕೊರೆದು ಪಂಪು ಅಳವಡಿಸಲು ₹1.50ಲಕ್ಷ ಅನುದಾನ ಬಿಡುಗಡೆಗೊಳಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿಯವರು ಶಾಲೆಗೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪಂಚಾಯತು ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಸದಸ್ಯರಾದ ಸುರೇಶ್ ನಾಯ್ಕ ಮೇನಾಲ, ಅಬ್ದುಲ್ಲಾ ಮೇನಾಲ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಕಟ್ಟಪುಣಿ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.