ಮಾಡ್ನೂರ್ ಗ್ರಾಮದ ಅಶ್ವತ್ತಡಿ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ
ಪುತ್ತೂರು : (ನ.27) ನೆಟ್ಟಣಿಗೆ ಮೂಡ್ನೂರ್ ಜಿಲ್ಲಾ ಪಂಚಾಯತು ಕ್ಷೇತ್ರದ ಮಾಡ್ನೂರು ಗ್ರಾಮದ ಅಶ್ವತಡಿ ಎಂಬಲ್ಲಿ ಕ್ಯಾಂಕ್ರೀಟ್ ರಸ್ತೆಗೆ 2ಲಕ್ಷ ಅನುದಾನವಿತ್ತು ಕಾಮಗಾರಿಗೆ ತೆಂಗಿನ ಕಾಯಿ ಒಡೆಯುವುದರ ಮೂಲಕ ಜಿಲ್ಲಾ ಪಂಚಾಯತು ಸದಸ್ಯೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ಯವರು ಚಾಲನೆ ನೀಡಿದರು.
ಸ್ಥಳೀಯ ಪಂಚಾಯತಿನ ಸದಸ್ಯರಾದ ರವೀಂದ್ರ ಪೂಜಾರಿ, ಮಾಲಿಂಗ ನಾಯ್ಕ್, ಚಿತ್ರಾ, ಹಿರಿಯರಾದ ಕೃಷ್ಣ ಭಟ್ ಪಲ್ಸಡ್ಕ, ಮಹಮ್ಮದ್ ಕುಂಞಿ, ಮೋನಪ್ಪ ಪೂಜಾರಿ ಕೆರೆಮಾರು, ಇಸುಬು, ಹಸೈನಾರ್ ಅಶ್ವತಡಿ, ಅಬ್ದುಲ್ಲಾ ಅಶ್ವಥಡಿ, ಪದ್ಮ ಪೂಜಾರಿ, ಜಗನ್ನಾಥ್ ರೈ ಗುತ್ತು, ರವಿ, ಉಮ್ಮರ್ ಅಶ್ವಥಡಿ, ಫಲಾನುಭವಿ ಗ್ರಾಮಸ್ಥರು ಉಪಸ್ಥಿತರಿದ್ದರು.