ಮಠಂತಬೆಟ್ಟು ದೇವಸ್ಥಾನ ದ ಜೀರ್ಣೋಧ್ಧಾರ ಕಾರ್ಯಗಳಿಗೆ ಅನುದಾನ ಒದಗಿಸಲು ಮನವಿ
ಪುತ್ತೂರು : (ನ.25) ಮುಂಬರುವ ಎಪ್ರಿಲ್ ತಿಂಗಳಿನಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿರುವ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಲ್ಲಿನ ತಡೆಗೋಡೆ ರಚನೆಗೆ ಅನುದಾನದವನ್ನು ನೀಡಿ ಸಹಕಾರ ನೀಡುವಂತೆ ಕರ್ನಾಟಕ ಸರಕಾರದ ಬಂದರು ಮತ್ತು ಮುಜುರಾಯಿ ಖಾತೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೋಟ ಶ್ರೀನಿವಾಸ ಪೂಜಾರಿ ಇವರನ್ನು ದೇವಳದ ನಿಯೋಗವು ಭೇಟಿ ನೀಡಿ ಮನವಿಯನ್ನು ಸಲ್ಲಿಸಲಾಯಿತು. ಸಚಿವರು ಮನವಿಗೆ ಪೂರಕವಾಗಿ ಸ್ಪಂದಿಸುವ ಭರವಸೆಯಿತ್ತರು.
ನಿಯೋಗದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ವಾರಿಸೇನ ಜೈನ್ ಕೋಡಿಂಬಾಡಿ, ರಾಜೀವ ಶೆಟ್ಟಿ ಕೇದಗೆ ಮತ್ತು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಾನಂದ ಕೋಡಿಂಬಾಡಿ ಇವರುಗಳು ಹಾಜರಿದ್ಧರು.
TAGS kodimbadyMahishamardhini TempleMatanthabetteuMatanthabettu Templetempleಕೋಡಿಂಬಾಡಿದೇವಸ್ಥಾನಮಠಂತಬೆಟ್ಟುಮಹಿಷಮರ್ದಿನಿ