ಎನ್.ಎಸ್.ಯು.ಐ ಕಾಲೇಜು ಘಟಕಗಳ ಪದಗ್ರಹಣ, ನಗರ ಪಾಲಿಕೆ ವಿಜೇತರಿಗೆ ಅಭಿನಂದನಾ ಸಮಾರಂಭ

ಮಂಗಳೂರು : (ನ.23) ದಕ್ಷಿಣ ಕನ್ನಡ ಎನ್.ಎಸ್.ಯು.ಐ ಹಾಗೂ ಮಂಗಳೂರು ನಗರ ಇದರ ವತಿಯಿಂದ ಮಂಗಳೂರಿನ ನಾಲ್ಕು ಕಾಲೇಜು ಎನ್.ಎಸ್.ಯು.ಐ ಘಟಕಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವು ದಿನಾಂಕ 23.11.2019ರಂದು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಎನ್.ಎಸ್.ಯು.ಐ ಜಿಲ್ಲಾ ಉಸ್ತುವಾರಿಯಾದ ಶ್ರೀ ಸುರೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

Nsui
ಜಿಲ್ಲಾ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಹಾಗೂ ಎನ್.ಎಸ್.ಯು.ಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಶೌನಕ್ ರೈ ಇವರ ನೇತೃತ್ವದಲ್ಲಿ ಜರುಗಿದ ಈ ಸಮಾರಂಭದಲ್ಲಿ ಪಾಲಿಕೆಯ ಸದಸ್ಯರ ಪರವಾಗಿ ಪ್ರವೀಣ್ ಚಂದ್ರ ಆಳ್ವ ಹಾಗೂ ಎ.ಸಿ ವಿನಯರಾಜ್‍ರವರು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಸಂದೇಶ ನೀಡಿದರು ನಾಲ್ಕು ಕಾಲೇಜುಗಳ ವಿದ್ಯಾರ್ಥಿ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Nsui

ಸದ್ರಿ ಕಾಲೇಜುಗಳ ವಿದ್ಯಾರ್ಥಿಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜರುಗಿತು. ಇದಕ್ಕೂ ಮುನ್ನ ಇತ್ತೀಚೆಗೆ ನಡೆದ ಮಹಾ ನಗರ ಪಾಲಿಕೆಯ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

Nsui
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಖಾಲಿದ್ ಉಜಿರೆ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಅನ್ಸಾರುದ್ಧೀನ್ ಸಾಲ್ಮರ, ಮಂಗಳೂರು ದಕ್ಷಿಣ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಮರ್ಥ್ ಭಟ್, ಮಾಜಿ ಎನ್.ಎಸ್.ಯು.ಐ ನಗರಾಧ್ಯಕ್ಷ ಶ್ರೇಯಸ್ ಭಟ್ ಉಪಸ್ಥಿತರಿದ್ದರು.

Nsui
ಜಿಲ್ಲಾ ಕಾರ್ಯದರ್ಶಿ ಆಸ್ಟನ್ ಸಿಕ್ವೇರಾ, ಅನ್ವಿತ್ ಕಟೀಲ್, ಎನ್.ಎಸ್.ಯು.ಐ ನಗರ ಉಪಾಧ್ಯಕ್ಷ ಪ್ರೀಮಸ್, ರಕ್ಷಣ್ ಗೌಡ, ಶೇಕ್ ಅಫ್ಸಾನ್, ರಾಹುಲ್, ಅಲ್ಫಾಝ್ ಬಜಾಲ್, ಆರೋನ್ ರೋಡ್ರಿಗಸ್ ಮುಂತಾದವರು ಸಹಕರಿಸಿದ್ದರು. ಮನ್ಸೂರ್ ಕಾರ್ಯಕ್ರಮ ನಿರ್ವಹಿಸಿದರು ಸವಾದ್ ಸುಳ್ಯ ಸ್ವಾಗತಿಸಿ, ಶೌನಕ್ ರೈ ವಂದಿಸಿದರು. ಕೊನೆಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

CATEGORIES
Share This

COMMENTS

Wordpress (0)
Disqus ( )
error: Content is protected !!