ರಾಮ್ ಸೇನಾ ಕಟೀಲು ಘಟಕದ ಉದ್ಘಾಟನೆ.
ಮಂಗಳೂರು :(ಅ.20) ರಾಮ್ ಸೇನಾ ದ.ಕ ಜಿಲ್ಲೆಯ ಕಟೀಲು ಘಟಕದ ಉದ್ಘಾಟನಾ ಕಾರ್ಯಕ್ರಮವನ್ನು ರಾಮ್ ಸೇನಾ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಪ್ರಸಾದ್ ಅತ್ತಾವರ್ ರವರು ಉದ್ಘಾಟಿಸಿದರು,
ವೇದಿಕೆಯಲ್ಲಿ ರಾಮ್ ಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಓದೂರು, ಮುಖಂಡರಾದ ಶ್ರೀ ಕಿರಣ್ ಶೆಟ್ಟಿ ಕಟೀಲ್, ಸೂರಜ್ ಕಟೀಲ್ ಹಾಗೂ ರಾಮ್ ಸೇನಾ ಜಿಲ್ಲಾ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಮ್ ಸೇನೆ ಕಟೀಲು ಘಟಕದ ಅಧ್ಯಕ್ಷರಾಗಿ ದೀಪಕ್ ಕಟೀಲು, ಉಪಾಧ್ಯಕ್ಷರಾಗಿ ರಮಾನಂದ ಕಟೀಲು ಕಾರ್ಯದರ್ಶಿಯಾಗಿ ಪ್ರಥಮ್ ಕಾಪಿಕಾಡ್ , ಉಪಕಾರ್ಯದರ್ಶಿಯಾಗಿ ಮಧುಸೂದನ್ ಕಟೀಲು, ಸಂಘಟನೆ ಕಾರ್ಯದರ್ಶಿಯಾಗಿ ಕೃತಿಕ್ ಕಟೀಲ್, ಸಲಹೆಗಾರಾಗಿ ಕಿರಣ್ ಶೆಟ್ಟಿ ಕಟೀಲ್ ಮತ್ತು ಸೂರಜ್ ಕಟೀಲ್ ಆಯ್ಕೆಯಾದರು.
ವರದಿ: ಆದರ್ಶ ಶೆಟ್ಟಿ ಉಪ್ಪಿನಂಗಡಿ.