ಡಾ| ಸುರೇಶ್ ಪುತ್ತೂರಾಯ ಮತ್ತು ಡಾ| ದೀಪಕ್ ರೈ ವಿರುದ್ಧ ನಗರ ಠಾಣೆಗೆ ದೂರು
ಪುತ್ತೂರು : (ಮೇ.29) ಪುತ್ತೂರಿನ ವೈದ್ಯರುಗಳಾದ ಸುರೇಶ್ ಪುತ್ತೂರಾಯ ಹಾಗೂ ಸರ್ಕಾರಿ ವೈದ್ಯಾಧಿಕಾರಿ ದೀಪಕ್ ರೈ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ನಿಂದನೆ ಹಾಗೂ ಸ್ವತಃ ವೈದ್ಯರಾಗಿ ಕೊರೋನಾ ರೋಗವು ಮೋದಿ ವಿರೋಧಿಗಳಿಗೂ ಬರಲಿ ಎನ್ನುವ ಬರಹದ ಪೊಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರೊದರ ಕುರಿತು ಯುವಕ ಕಾಂಗ್ರೆಸ್ ನಿಂದ ಪುತ್ತೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ಅಧ್ಯಕ್ಷ ಯು. ಟಿ. ತೌಸಿಫ್ ರವರು ದೂರು ನೀಡಿದ್ದು ಜಿಲ್ಲಾ ಯುವಕ ಕಾಂಗ್ರೆಸ್ ಕಾರ್ಯದರ್ಶಿ ಶಬೀರ್ ಕೆಂಪಿ, ನಗರ ಸಭಾ ಸದಸ್ಯ ರೋಬಿನ್ ತಾವ್ರೋ, ಪುತ್ತೂರು ವಿಧಾನಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹನೀಫ್ ಪುಣ್ಚತ್ತಾರ್, ಕಾರ್ಯದರ್ಶಿ ತೌವಿದ್ ಸಾಲ್ಮರ, ಯುವಕ ಕಾಂಗ್ರೆಸ್ ಮುಖಂಡರಾದ ಶಬೀರ್ ನಂದಾವರ, ರಹಿಮಾನ್ ಉಪ್ಪಿನಂಗಡಿ ಈ ಸಂದರ್ಭದಲ್ಲಿ ಜೊತೆಗಿದ್ದರು.