ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಿಸಲು ಸವಾದ್ ಸುಳ್ಯ ಮನವಿ.
ಮಂಗಳೂರು : (ಮೇ.19) ದಕ್ಷಿಣ ಕನ್ನಡ ಜಿಲ್ಲಾ ಎನ್.ಯಸ್.ಯು.ಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ರವರ ನೇತೃತ್ವದಲ್ಲಿ ಮಂಗಳೂರು ನಗರದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ತಪ್ಪಿಸಿ, COVID – 19 ಲಾಕ್ ಡೌನ್ ನ ಈ ಸಮಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಪೋಷಕರ ಹತ್ತಿರ ಮಕ್ಕಳ ಡೊನೇಷನ್ ಕಟ್ಟಲು ಹಣ ಇರುವುದಿಲ್ಲ
ಹಾಗೂ ಸರ್ಕಾರಿ ಶುಲ್ಕ ಪಡೆಯಲು ಆದೇಶಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪ ರವರಿಗೆ ಮನವಿಯನ್ನು ಮಂಗಳವಾರ ಮೇ 19 ರಂದು ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಎನ್.ಯಸ್.ಯು.ಐ ಕಾರ್ಯದರ್ಶಿ ಆಷ್ಟನ್ ಸಿಕ್ವೇರಾ ಮಂಗಳೂರು ದಕ್ಷಿಣ ಎನ್.ಯಸ್.ಯು.ಐ ಅಧ್ಯಕ್ಷರಾದ ಶೌನಕ್ ರೈ, ಶೈಕ್ ಆಫ್ಶನ್ ಉಪಸ್ಥಿತರಿದ್ದರು.