“ಯುವ ಬಂಟ ದಿನಾಚರಣೆ” ಆಮಂತ್ರಣ ಪತ್ರ ಬಿಡುಗಡೆ.
ಪುತ್ತೂರು : (ಫೆ.10) ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಫೆಬ್ರವರಿ 22 ರಂದು ನಡೆಯಲಿರುವ ಯುವ ಬಂಟ ದಿನಾಚರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಶ್ರೀ ದೇವರ ಪ್ರಾರ್ಥನೆಯೊಂದಿಗೆ ನೆರವೇರಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ, ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆ, ಸಹ ಸಂಚಾಲಕ ಅಜಯ್ ಆಳ್ವ ಬಳ್ಳಮಜಲು,
ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಾಖೇಶ್ ರೈ ಕೆಡೆಂಜಿ, ಖಜಾಂಜಿ ಶ್ರೀಮತಿ ಮೀರಾ ಭಾಸ್ಕರ ರೈ ಮಾದೋಡಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ವತ್ಸಲಾ ರೈ, ಖಜಾಂಜಿ ಶ್ರೀಮತಿ ಅನುಶ್ರೀ, ಪದ್ಮಾನಾಭ ಶೆಟ್ಟಿ, ನಿತಿನ್ ಪಕ್ಕಳ, ಮಹಾಬಲ ರೈ ಒಳತ್ತಡ್ಕ, ಚೆನ್ನಪ್ಪ ರೈ ದೇರ್ಲ, ಅಶೋಕ್ ರೈ ದೇರ್ಲ, ಯುವ ಬಂಟರ ಸಂಘದ ಸಲಹೆಗಾರ ನ್ಯಾಯವಾದಿ ದುರ್ಗಾ ಪ್ರಸಾದ್ ರೈ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕೆ ಸಿ ಅಶೋಕ್ ಶೆಟ್ಟಿ, ಸದಾಶಿವ ಶೆಟ್ಟಿ ಮಾರಂಗ, ಸುಶಾಂತ್ ರೈ ಕೊಡಿಂಬಾಡಿ, ಗೌತಮ್ ರೈ ಸಾಂತ್ಯ, ಜಯರಾಜ್ ರೈ ಡೆಂಬಾಳೆ, ಕ್ರೀಡಾ ಸಂಚಾಲಕ ಶಶಿರಾಜ್ ರೈ ಮುಂಡಾಳಗುತ್ತು, ಧಾರ್ಮಿಕ ಸಂಚಾಲಕ ಸನತ್ ಕುಮಾರ್ ರೈ ಕುರಿಯ ಏಳ್ನಾಡು ಗುತ್ತು, ತರಬೇತಿ ಸಂಚಾಲಕ ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ಸದಸ್ಯತ್ವ ನೊಂದಣಿ ಸಂಚಾಲಕ ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಕಛೇರಿ ನಿರ್ವಹಣಾ ಸಂಚಾಲಕ ರವಿಚಂದ್ರ ರೈ ಕುಂಬ್ರ, ಮಾಧ್ಯಮ ಸಂಚಾಲಕ ಉಮಾಪ್ರಸಾದ್ ರೈ, ಸಾಮಾಜಿಕ ಸಂಚಾಲಕ ಭರತ್ ರಾಜ್ ರೈ, ಉಪಸ್ಥಿತರಿದ್ದರು. ಅಧ್ಯಕ್ಷ ಪ್ರಕಾಶ್ ರೈ ಸಾರಕರೆ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಬನ್ನೂರು ವಂದಿಸಿದರು.