ಖಾಸಗಿ ವಾಹನದ ಮೇಲಿನ ಹುದ್ದೆಗಳ ನಾಮಫಲಕಕ್ಕೆ ಸುಪ್ರೀಂ ಬ್ರೇಕ್.
ಬೆಂಗಳೂರು : (ಜ.03) ಖಾಸಗಿ ವಾಹನಗಳ ಮೇಲೆ ಹುದ್ದೆಗಳ ಅಳವಡಿಸಿದ ನಾಮಫಲಕ ತೆರವಿಗೆ ಹೈಕೋರ್ಟ್ ನ್ಯಾಯಮೂರ್ತಿ ಆರ್. ದೇವದಾಸ್ ಪೀಠದಿಂದ ಆದೇಶಿಸಿದರು.
ಅನಧಿಕೃತ ಮಾನವ ಹಕ್ಕುಗಳ ಆಯೋಗದ ನಾಮಫಲಕ ಅಳವಡಿಕೆ ಪ್ರಕರಣವನ್ನು ರದ್ದು ಕೋರಿ ಮಂಗಳೂರಿನ ಆನಂದ್ ಶೆಟ್ಟಿ ಎಂಬುವರು ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ತಮ್ಮ ಹುದ್ದೆಗಳ ನಾಮಫಲಕಗಳನ್ನು ಅಳವಡಿಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಹಾಲಿ ಮಾಜಿ ಸಂಸದರು, ಶಾಸಕರು ಹಾಗೂ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತಿ ಸದಸ್ಯರು, ನಗರ ಪಾಲಿಕೆಗಳ ಸದಸ್ಯರು, ವಿವಿಧ ಸಂಘಟನೆಗಳು, ಎನ್ಜಿಓ ಸದಸ್ಯರ ಖಾಸಗಿ ಕಾರುಗಳ ಮೇಲಿನ ಅಳವಡಿಸಿರುವ ನಾಮಫಲಕ ತೆರವಿಗೂ ಆದೇಶಿಸಿದೆ. ಕೂಡಲೇ ನಾಮಫಲಕ ತೆರವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆದೇಶ ನೀಡಿಲಾಗಿದೆ.
ಹುದ್ದೆಗಳ ನಾಮಫಲಕಗಳನ್ನು ಅಳವಡಿಸಿಕೊಂಡು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಕೂಡಲೇ ನಾಮಫಲಕ ತೆರವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದಾರೆ.