ಪೌರತ್ವ ಕಾಯ್ದೆ : ದೇಶಾದ್ಯಂತ ಜನಜಾಗೃತಿ ಅಭಿಯಾನಕ್ಕೆ ಬಿಜೆಪಿ ಸಿದ್ಧತೆ.

ಹೊಸದಿಲ್ಲಿ : (ಡಿ.16) ಪೌರತ್ವ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ವ್ಯಾಪಕವಾಗಿ ಪ್ರತಿಭಟನೆಗಳು ಮುಂದುವರಿದಿರುವಂತೆಯೇ, ಈ ಮಸೂದೆಯ ಕುರಿತು ಜನಜಾಗೃತಿ ಮೂಡಿಸಲು ರಾಷ್ಟ್ರವ್ಯಾಪಿಯಾಗಿ ಅಭಿಯಾನವನ್ನು ಹಮ್ಮಿಕೊಳ್ಳುವುದಾಗಿ ಬಿಜೆಪಿ ರವಿವಾರ ಘೋಷಿಸಿದೆ ಹಾಗೂ ಈ ಮಸೂದೆಯು ಮುಸ್ಲಿಮರು ಅಥವಾ ಇತರ ಯಾವುದೇ ಸಮುದಾಯದ ವಿರುದ್ಧ ತಾರತಮ್ಯವನ್ನು ಮಾಡುತ್ತಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

Sambith patra

ಧಾರ್ಮಿಕ ದೌರ್ಜನ್ಯದಿಂದ ಪಾರಾಗಲು ಭಾರತಕ್ಕೆ ವಲಸೆ ಬಂದ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ಪಡೆಯಲು ಅವಕಾಶವನ್ನು ನೀಡುವ ಈ ಮಸೂದೆಯ ಬಗ್ಗೆ ಜನತೆಗೆ ಮಾಹಿತಿ ನೀಡಲು ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಜನಜಾಗೃತಿ ಅಭಿಯಾನ ನಡೆಸಲಿದ್ದಾರೆಂದು ಪಕ್ಷದ ವಕ್ತಾರ ಸಂಬಿತ್ ಪಾತ್ರ ತಿಳಿಸಿದ್ದಾರೆ.

Advertising

ನಮ್ಮ ಮುಸ್ಲಿಂ ಸೋದರರು ಹಾಗೂ ಸೋದರಿಯರ ಒಂದೇ ಒಂದು ಹಕ್ಕನ್ನು ಕಸಿದುಕೊಳ್ಳುವಂತಹ ಯಾವುದೇ ಕಾನೂನು ಈ ಮಸೂದೆಯಲ್ಲಿಲ್ಲ. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಲ್ಲಿ ಧಾರ್ಮಿಕ ದಬ್ಬಾಳಿಕೆಗಳಿಂದ ಪಾರಾಗಲು ಭಾರತಕ್ಕೆ ವಲಸೆ ಬಂದು. ಯಾವುದೇ ಹಕ್ಕುಗಳಿಂದ ವಂಚಿತರಾಗಿರುವವರಿಗೆ ಹಕ್ಕುಗಳನ್ನಷ್ಟೇ ಈ ಮಸೂದೆಯಡಿ ಒದಗಿಸಲಾಗುತ್ತದೆ ಎಂದು ಪಾತ್ರ ತಿಳಿಸಿದ್ದಾರೆ. ಜನಜಾಗೃತಿ ಅಭಿಯಾನ ಆರಂಭಿಸುವ ಮುನ್ನ 11 ರಾಜ್ಯಗಳ ಪದಾಧಿಕಾರಿಗಳಿಗೆ ಪೌರತ್ವ ಕಾಯ್ದೆಯನ್ನು ವಿವರಿಸಲಾಗುವುದು ಎಂದವರು ಹೇಳಿದರು.

CATEGORIES
Share This

COMMENTS

Wordpress (0)
Disqus ( )
error: Content is protected !!