ಹೊಕ್ಕಾಡಿಗೋಳಿ ವೀರ – ವಿಕ್ರಮ ಕಂಬಳ ಕೂಟದ ಫಲಿತಾಂಶ
ಮಂಗಳೂರು : (ಡಿ.08) ಹೊಕ್ಕಾಡಿಗೋಳಿ ಜಿಲ್ಲಾ ಕಂಬಳ ಸಮಿತಿಯ ಈ ಋತುವಿನ ಎರಡನೇ ಕಂಬಳವಾದ ವೀರ- ವಿಕ್ರಮ ಜೋಡುಕರೆ ಕಂಬಳ ರವಿವಾರ ಸಂಪನ್ನವಾಗಿದೆ. ಶನಿವಾರ ಮತ್ತು ಭಾನುವಾರ ನಡೆದ ಜಾನಪದ ಕ್ರೀಡೋತ್ಸವ ದಕ್ಷಿಣ ಕನ್ನಡ ಜಿಲ್ಲೆಯ ಹೊಕ್ಕಾಡಿಗೋಳಿಯಲ್ಲಿ ಅದ್ದೂರಿಯಾಗಿ ನೆರವೇರಿದೆ.
ಈ ಸಾಲಿನ ಕೂಟದಲ್ಲಿ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದು, ಒಟ್ಟು ಆರು ವಿಭಾಗದಲ್ಲಿ ಸ್ಪರ್ಧೆ ನಡೆದಿದೆ. ಅವುಗಳ ಫಲಿತಾಂಶ ಈ ಕೆಳಗಿನಂತಿದೆ.
ಕನೆಹಲಗೆ : ವಾಮಂಜೂರು ತಿರುವೈಲುಗುತ್ತು ಅಭಯ್ ನವೀನ್ ಚಂದ್ರ ಆಳ್ವ (6.5 ಕೋಲು ನಿಶಾನೆ)
ಅಡ್ಡ ಹಲಗೆ
ಪ್ರಥಮ : ಆಲದ ಪದವು ಮೆಗಿನಮನೆ ಶುಭ್ರತ್ ವರುಣ್ ಶೆಟ್ಟಿ
ದ್ವಿತೀಯ : ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ
ಹಗ್ಗ ಹಿರಿಯ
ಪ್ರಥಮ : ಮಾಳ ಆನಂದ ನಿಲಯ ಶೇಖರ್ ಆನಂದ್ ಶೆಟ್ಟಿ
ದ್ವಿತೀಯ : ಮೂಡಬಿದಿರೆ ಕರಿಂಜೆ ವಿನು ವಿಶ್ವನಾಥ್ ಶೆಟ್ಟಿ
ಹಗ್ಗ ಕಿರಿಯ
ಪ್ರಥಮ : ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿ
ದ್ವಿತೀಯ : ನಕ್ರೆ ಮಹೋದರ ನಿವಾಸ ಇಶಾನಿ ತುಕ್ರ ಭಂಡಾರಿ
ನೇಗಿಲು ಹಿರಿಯ
ಪ್ರಥಮ : ಬೋಳದಗುತ್ತು ಸತೀಶ್ ಶೆಟ್ಟಿ
ದ್ವಿತೀಯ : ಕೃಷ್ಣಾಪುರ ನಡುಮನೆ ಪರಮೇಶ್ವರ್ ಸಾಲ್ಯಾನ್
ನೇಗಿಲು ಕಿರಿಯ
ಪ್ರಥಮ : ಪನೋಳಿಬೈಲು ಭಂಡಾರಮನೆ ಶಿವಾನಂದ ಕುಲಾಲ್
ದ್ವಿತೀಯ : ಸಿದ್ದಕಟ್ಟೆ ಹೊಂಗಾರಹಿತ್ಲು ಮೋಕ್ಷಿತ್ ಕಾಂತಣ್ಣ ಶೆಟ್ಟಿ
ವರದಿ : ಶಾಶ್ವತ್ ಸಾಲ್ಯನ್