ಮಠಂತಬೆಟ್ಟು ಬ್ರಹ್ಮಕಲಶ ಸಮಿತಿಯಿಂದ ಧರ್ಮಸ್ಥಳ ದ ಧರ್ಮಾಧಿಕಾರಿ ಭೇಟಿ
ಪುತ್ತೂರು : (ಡಿ.02) ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಏಪ್ರಿಲ್ 21 ರಿಂದ 26 ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜೀರ್ಣೋದ್ಧಾರ ಕೆಲಸ ಕಾಮಗಾರಿಗಳು ಮತ್ತು ಬ್ರಹ್ಮಕಲಶೋತ್ಸವದ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ, ಪದ್ಮವಿಭೂಷಣ, ರಾಜರ್ಷಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನವನ್ನು ದೇವಳದ ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನಾ ಸಮಿತಿ ಮತ್ತು ಊರ ಭಕ್ತಾದಿಗಳೊಂದಿಗೆ ಪಡೆಯಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೆ. ಎಸ್
ರೈ ಎಸ್ಟೇಟ್ ಕೋಡಿಂಬಾಡಿ, ಕಾರ್ಯಧ್ಯಕ್ಷರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು ಸದಸ್ಯರುಗಳಾದ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು, ಶ್ರೀನಿವಾಸ ನಾಯ್ಕ ದಾಸಕೋಡಿ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ರಾಜೀವ್ ಶೆಟ್ಟಿ ಕೇದಗೆ ಮಠಂತಬೆಟ್ಟು, ವಾರಿಸೇನ ಜೈನ್ ಕೋಡಿಯಾಡಿ, ಜಗನ್ನಾಥ ಶೆಟ್ಟಿ ನಡುಮನೆ, ದಾಮೋದರ ಶೆಟ್ಟಿ ಮಠಂತಬೆಟ್ಟು, ಶಾಂತಾರಾಮ ಸಾಮಾನಿ ಮಠಂತಬೆಟ್ಟು,
ಜೀರ್ಣೋದ್ಧಾರ ಸಮಿತಿಯ ಸಹ ಸಂಚಾಲಕರಾದ ಯೋಗೀಶ್ ಯಸ್. ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು, ಶೇಖರ ಪೂಜಾರಿ ಡೆಕ್ಕಾಜೆ ಹಾಗೂ ಸದಸ್ಯರುಗಳಾದ ಹರೀಶ್ ಆಚಾರ್ಯ ಕೊಂಬಕೋಡಿ, ಸುಭಾಷ್ ರವಿ ದಡಿಕೆತ್ತಾರು, ಪ್ರೀತಮ್ ಶೆಟ್ಟಿ ಕೇದಗೆ, ಮಹಿಳಾ ಸಮಿತಿಯ ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ವೇದಾವತಿ ಸದಾಶಿವ ರೈ, ಗುಲಾಬಿ ಸದಾಶಿವ ಸಾಮಾನಿ, ವಾರಿಜಾ ಡೆಕ್ಕಾಜೆ, ಯುಮುನಾ ಡೆಕ್ಕಾಜೆ, ಹರಿಣಾಕ್ಷಿ ಶೇಖರ್ ಪೂಜಾರಿ, ಪ್ರೇಮಾ ದೇವದಾಸ್, ಪವಿತ್ರಾ ಸೇಡಿಯಾಪು, ಪವಿತ್ರಾ ಕೈಪ ಉಪಸ್ಥಿತರಿದ್ದರು.