ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದಿಂದ ಉಳ್ಳತ್ತೋಡಿ ದೇವಾಲಯದಲ್ಲಿ ಶ್ರಮದಾನ
ಪುತ್ತೂರು : (ನ.24) ಶ್ರಮಜೀವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣಗಾರರ ಸಂಘ ಉಪ್ಪಿನಂಗಡಿ ವಲಯ ಇದರ ವತಿಯಿಂದ ಜೀರ್ಣೋದ್ಧಾರಗೊಳ್ಳುತ್ತಿರುವ ಹಿರೇಬಂಡಾಡಿ ಗ್ರಾಮದ ಉಳ್ಳತ್ತೋಡಿ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರಮದಾನ ಕಾರ್ಯವು ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಮಹಾಲಿಂಗ ಕಜೆಕ್ಕಾರು, ರಾಮಣ್ಣ ಗೌಡ ಹಿರೇಬಂಡಾಡಿ, ಭಾರತಿ ಕಜೆಕ್ಕಾರು, ವಿಠಲ ಪೂಜಾರಿ ರಾಮಕುಂಜ, ದೇವಪ್ಪ ಬಜತ್ತೂರು, ಕೊರಗಪ್ಪ ಅಗರಿ, ಸದಸ್ಯರಾದ ಕೊರಗಪ್ಪ ವಳಾಲು , ರವಿ ಕಜೆಕ್ಕಾರು, ಶಾಂತಪ್ಪ ಶೆಟ್ಟಿ ಬೊಳ್ಳಾವು, ನಾಣ್ಯಪ್ಪ ಗೌಡ ಪುಳಿತ್ತಡಿ, ಅನಿಲ್ ರಾಮನಗರ, ಸೀಮ ರಾಮನಗರ, ಗೀತಾ ಅತ್ತಾಜೆ, ಪಿ.ಸಿ ಲಲಿತಾ ಹರಿನಗರ, ಶೇಖರ ಕಾಪು, ಹೊನ್ನಪ್ಪ ಗೌಡ ವರೆಕ್ಕ, ಕರಿಯಪ್ಪ ಗೌಡ ವರೆಕ್ಕ ಸೇರಿದಂತೆ ನೂರಾರು ಮಂದಿ ಇದ್ದರು.