ವೃದ್ದೆ ಪೊಡಿಯಮ್ಮ ನಿಧನ
ಪುತ್ತೂರು : (ನ.14) ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ನಿವಾಸಿ ಪೊಡಿಯಮ್ಮ (ವ.92) ಇವರು ನವಂಬರ್ 14 ರಂದು ಅಸೌಖ್ಯದಿಂದಾಗಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರ ಕುಂಞಣ್ಣ ಕೈಲಾಜೆ, ಮೊಮ್ಮಕ್ಕಳಾದ ದಮಯಂತಿ, ಸವಿತ, ವಿಶ್ವ ಕುಮಾರ್, ಹರೀಶ, ಪ್ರಮೀಳ ಇವರುಗಳನ್ನು ಆಗಲಿದ್ದಾರೆ.
ಮೃತರ ಮನೆಗೆ ದಲಿತ್ ಸೇವಾ ಸಮಿತಿ ಯ ಜಿಲ್ಲಾ ಉಪಾಧ್ಯಕ್ಷರಾದ ರಾಜು ಹೊಸ್ಮಠ , ಪದಾಧಿಕಾರಿಗಳಾದ ಸೀತಾರಾಮ ಕುಂಬುರ್ಗ, ಮೋಹನ ಬೀರಿಗ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.