ಕಾವು ಕಿರಿಯ ಆರೋಗ್ಯ ಉಪಕೇಂದ್ರ ದ ಆವರಣ ಗೋಡೆ ಕಾಮಗಾರಿಗೆ ಚಾಲನೆ
ಪುತ್ತೂರು : (ನ.9) ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತು ಕ್ಷೇತ್ರದ ಮಾಡ್ನೂರು ಗ್ರಾಮದ ಕಾವಿನಲ್ಲಿ ಕಿರಿಯ ಅರೋಗ್ಯ ಉಪಕೇಂದ್ರದ ಆವರಣ ಗೋಡೆ ಮತ್ತು ಶೀಟ್ ಅಳವಡಿಕೆಗೆ 2.50 ಲಕ್ಷ ಅನುದಾನ ವಿರಿಸಿ, ಜಿಲ್ಲಾ ಪಂಚಾಯತು ಸದಸ್ಯೆ ಶಿಕ್ಷಣ ಮತ್ತು ಅರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾಹೇಮನಾಥ್ ಶೆಟ್ಟಿ ಯವರು ತೆಂಗಿನಕಾಯಿ ಒಡೆದು ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾವು ಹೇಮನಾಥ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷ, ಹಾಗೂ ಪಂಚಾಯತು ಸದಸ್ಯರುಗಳಾದ ದಿವ್ಯನಾಥ್ ಶೆಟ್ಟಿ, ರವೀಂದ್ರ ಪೂಜಾರಿ ಮಂಜಕೊಟ್ಯ , ನವೀನ ಕೌಡಿಚ್ಚಾರು, ಚಿತ್ರ ಮುಂಡಕೊಚ್ಚಿ, ಮೋನಪ್ಪ ಪೂಜಾರಿ ಕೆರೆಮಾರು, ಗಂಗಾಧರ ಪಾಟಾಳಿ ಪಟ್ಟುಮೂಲೆ, ಗೋಪಾಲ ಪಾಟಾಳಿ ಪಟ್ಟುಮೂಲೆ, ಮಹಮ್ಮದ್ ಕುಂಞ ಅಶ್ವತಡಿ, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು