ಮಾಡ್ನೂರ್ ತೋಟದ ಮೂಲೆ ಚರಂಡಿ ಕಾಮಗಾರಿ ಪ್ರಾರಂಭ
ಪುತ್ತೂರು : (ನ.8) ನೆಟ್ಟಣಿಗೆ ಮುಡ್ನೂರು ಜಿಲ್ಲಾಪಂಚಾಯತ್ ಕ್ಷೇತ್ರದ ಮಾಡ್ನೂರು ಗ್ರಾಮದ ತೋಟದ ಮೂಲೆ ಚರಂಡಿ ರಚನೆಗೆ ಸುಮಾರು 2.85ಲಕ್ಷ ಅನುದಾನವಿರಿಸಿ ಕಾಮಗಾರಿಗೆ ನಾರಿಕೇಳವನ್ನು ಒಡೆದು ಚಾಲನೆಯನ್ನು ಜಿಲ್ಲಾಪಂಚಾಯತ್ ಶಿಕ್ಷಣ ಮತ್ತು ಅರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾಹೇಮನಾಥ್ ಶೆಟ್ಟಿ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ವಾರ್ಡ್ ಸದಸ್ಯರುಗಳಾದ ದಿವ್ಯನಾಥ್ ಶೆಟ್ಟಿ ಕಾವು, ನವೀನ ಕೌಡಿಚ್ಚಾರು,ಮೋನಪ್ಪ ಪೂಜಾರಿ ಕೆರೆಮಾರು, ಹಾಗೂ ಫಲಾನುಭವಿ ಗ್ರಾಮಸ್ಥರು ಉಪಸ್ಥಿತರಿದ್ದರು.