ಸರ್ವೆ ಶ್ರೀ ಸುಬ್ರಾಯ ದೇವರ ಬಾಲಾಲಯ ಪ್ರತಿಷ್ಟಾಪನೆ
ಪುತ್ತೂರು : (ನ.4) ತಾಲೂಕಿನ ಸರ್ವೆ ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನ ಸರ್ವೆ ಇದರ ಜೀರ್ಣೋದ್ದಾರ ದ ಪ್ರಯುಕ್ತ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ್ ಶಿಕ್ಷಣ ಮತ್ತು ಅರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ಭಾಗವಹಿಸಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಶಿವರಂಜನ್, ಶ್ರೀಮತಿ ನಳೀನಿ ಲೋಕಪ್ಪ ಗೌಡ, ಪ್ರಸಾದ್ ರೈ ಸೊರಕೆ, ಶಿವನಾಥ್ ರೈ, ಜಿ.ಕೆ ಪ್ರಸನ್ನ, ಸುಬ್ರಹ್ಮಣ್ಯ ಭಟ್ ಕಾಶಿಮಠ ಫಾರ್ಮ್, ಸದಾಶಿವ ಭಂಡಾರಿ, ಮಹಾಬಲ ರೈ ಮೇಗಿನಗುತ್ತು ಮತ್ತು ದೇವಸ್ಥಾನದ ತಂತ್ರಿ ಸುಬ್ರಾಯ ಬಳ್ಳುಕುರಾಯ ಉಪಸ್ಥಿತರಿದ್ದರು.