“ವಿಶ್ವಶಾಂತಿ ಪಯಣ” ದ ಬಗ್ಗೆ ಕಾವು ಬುಶ್ರಾ ಶಾಲೆಯಲ್ಲಿ ಡ್ರಾಯಿಂಗ್ ಸ್ಪರ್ಧೆ
ಪುತ್ತೂರು : (ನ.2) ಕಾವು ಲಯನ್ಸ್ ಕ್ಲಬ್ ವತಿಯಿಂದ ಕಾವು ಬುಶ್ರಾ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಶಾಂತಿ ಪಯಣ ದ ಬಗ್ಗೆ ಡ್ರಾಯಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್.ಕಾವು ಹೇಮನಾಥ್ ಶೆಟ್ಟಿ ಯವರು ಅಧ್ಯಕ್ಷತೆ ವಹಿಸಿ ವಿಶ್ವ ಶಾಂತಿ ಬಿತ್ತುವ ಕೆಲಸ ಮಾಡುವುದು ಮತ್ತು ಅದರ ಮಹತ್ವದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬುಶ್ರಾ ವಿದ್ಯಾಲಯದ ಸಂಚಾಲಕ ಲ.ಬುಶ್ರಾ ಅಝೀಜ್, ಉಪಾಧ್ಯಕ್ಷ ಲ. ಶರತ್ ಕುಮಾರ್ ರೈ ಕಾವು, ಕಾರ್ಯದರ್ಶಿ ಲ. ರಮೇಶ್ ರೈ ಸಾಂತ್ಯ, ಖಜಾಂಜಿ ಲ. ಕೃಷ್ಣಪ್ಪ ಗೌಡ, ಲ. ಜಯಪ್ರಕಾಶ್ ರೈ ನೂಜಿಬೈಲು, ಮತ್ತಿತರರು ಉಪಸ್ಥಿತರಿದ್ದರು.
ವರದಿ : ರವಿಪ್ರಸಾದ್ ಶೆಟ್ಟಿ