ರಿಕ್ಷಾ ತಂಗುದಾಣಕ್ಕೆ ಸ್ಥಳ ಪರಿಶೀಲನೆ ಮಾಡಿದ ಕಾವು ಹೇಮನಾಥ್ ಶೆಟ್ಟಿ
ಪುತ್ತೂರು : ( ಅ.23) ಪುತ್ತೂರು ನಗರದ ಮುರ ಜಂಕ್ಷನ್ ನಲ್ಲಿ ವಿಧಾನಪರಿಷತ್ ಶಾಸಕ ಐವಾನ್ ಡಿಸೋಜ ರ ಅನುದಾನದಿಂದ ನಿರ್ಮಾಣವಾಗಲಿರುವ ರಿಕ್ಷಾ ತಂಗುದಾಣದ ಕಾಮಗಾರಿ ಪ್ರಾರಂಭಿಸಲು
ಸ್ಥಳಿಯ ಉದ್ಯಮಿಗಳು ಮತ್ತು ರಿಕ್ಷಾ ಚಾಲಕ, ಮಾಲ಼ಕರ ಜೊತೆ ಕಾಂಗ್ರೆಸ್ ನಾಯಕ ಕಾವು ಹೇಮನಾಥ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಶ್ರೀ.ಈಶ್ವರ ಭಟ್ ಪಂಜಿಗುಡ್ಡೆ, ರವಿಪ್ರಸಾದ್ ಶೆಟ್ಟಿ ಬನ್ನೂರು ಸೇರಿದಂತೆ ಹಲವು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.