ಮೈಸೂರು ದಸರಾ ಕ್ರೀಡಾಕೂಟ ಬಂಟ್ವಾಳ ಕ್ಕೆ ಒಳಿದ ಅವಳಿ ಪದಕ
ಮೈಸೂರು : ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಮಟ್ಟದ ಮೈಸೂರು ದಸರಾ ಕ್ರೀಡಾಕೂಟ ದಸರಾ ಸಿ.ಎಂ ಕಪ್ 2019 ರ ಮೈಸೂರಿನಲ್ಲಿ ನಡೆದ ಪುರುಷರ ಚೆಸ್ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ದಂಡೆ ವಕೀಲ ದಂಪತಿಗಳ ಇರ್ವರು ಪುತ್ರರಾದ “ಧ್ಯಾನ್ ಕೃಷ್ಣ ಶೆಟ್ಟಿ ದಂಡೆ ಮತ್ತು ಧೀನ್ ರಾಮ್ ಶೆಟ್ಟಿ ದಂಡೆ” ಕ್ರಮವಾಗಿ ಬೆಳ್ಳಿ ಮತ್ತು ಕಂಚು ಬಹುಮಾನ ಪಡೆದಿರುತ್ತಾರೆ.
ಇವರು ಬಂಟ್ವಾಳ ರಾಘರಾಮ ಮುಕುಂದ ಪ್ರಭು ಸೆಂಟರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಡೆರಿಕ್ ಚೆಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.