ಬಂಟ್ವಾಳ ಎಸ್.ವಿ.ಎಸ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ಮಾಜಿ ಸಚಿವ ರೈ ಯಶಸ್ವಿ ಸಂಧಾನ
ಬಂಟ್ವಾಳ : ಎಸ್.ವಿ.ಎಸ್. ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಮುಷ್ಕರ ನಡೆಸಿದ ಸಂದರ್ಭ ಕಾಲೇಜಿಗೆ ಭೇಟಿ ನೀಡಿದ ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ ವಿದ್ಯಾರ್ಥಿಗಳ ಅಹವಾಲುಗಳನ್ನು ಸ್ವೀಕರಿಸಿ ಎಸ್. ವಿ. ಎಸ್. ಕಾಲೇಜಿನ ಸಂಚಾಲಕರಾದ ಕೊಡ್ಲಗಿ ಪ್ರಕಾಶ್ ಶೆಣೈರೊಡನೆ ಮಾತುಕತೆ ನಡೆಸಿ ವಿದ್ಯಾರ್ಥಿಗಳ ಬೇಡಿಕೆ ಈಡೇರುವಂತೆ ಮಾಡಿ ಮುಷ್ಕರವು ತನ್ನ ಸಂಧಾನ ಮಾತುಕತೆ ಮೂಲಕ ಸುಖಾಂತ್ಯಗೊಳಿಸಿದರು .
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ನಾಯಕರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್ , ಸದಾಶಿವ ಬಂಗೇರ, ಜನಾರ್ದನ್ ಚಡ್ತಿಮಾರ್ , ಜಗದೀಶ್ ಕೊಯಿಲ, ಪ್ರಶಾಂತ್ ಕುಲಾಲ್, ಚಂದ್ರಶೇಖರ್ ಬಾಳ್ತಿಲ, ವಿಶ್ವಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.