ಡಿಕೆಶಿ ಪದಗ್ರಹಣ ಯಶಸ್ವಿಗೊಳಿಸಲು ಕೌಜಲಗಿಯಲ್ಲಿ ಪೂರ್ವಭಾವಿ ಸಭೆ.
ಬೆಳಗಾವಿ : (ಜೂ.06) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕಗೊಂಡ ಹಿನ್ನೆಲೆಯಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪೂರ್ವಭಾವಿ ಸಭೆಯನ್ನು ಕೌಜಲಗಿ ಕಾಂಗ್ರೆಸ್ ಕಛೇರಿಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಜನಪ್ರಿಯ ಕಾಂಗ್ರೆಸ್ ಮುಖಂಡರು ಶ್ರೀಯುತ ಅರವಿಂದ್ ದಳವಾಯಿ. ಕೌಜಲಗಿ ಬ್ಲಾಕ್ ಅಧ್ಯಕ್ಷರು ಶ್ರೀ ಲಗಮಣ್ಣ ಕಳಸನ್ನವರ, ಕೆಪಿಸಿಸಿ ವೀಕ್ಷಕರು ಶ್ರೀ ರಾಜುಗೌಡ ಪೊಲೀಸ್ ಪಾಟೀಲ್, ಶ್ರೀ ಗುರುರಾಜ ಪೂಜೇರ, ಯುವ ಕಾಂಗ್ರೆಸ್ ಮುಖಂಡರು ಶ್ರೀ ಭೀಮಶಿ ಕಾರದ್ದಗಿ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.