ಇಂದು 11 ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ನೀಡಿದ ಜನತೆ ಸೇವಾ ಟ್ರಸ್ಟ್.
ಪುತ್ತೂರು : (ಮಾ.26) ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಆಗಿ ಅಗತ್ಯ ವಸ್ತುಗಳಿಗೆ ಪರದಾಡುತ್ತಿರುವ ಬಡ ಕಾರ್ಮಿಕ ವರ್ಗದ ಜನರನ್ನು ಗುರುತಿಸಿ ಅವರಿಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಒದಗಿಸಿ ಸಹಾಯ ಹಸ್ತ ಚಾಚುತ್ತಿರುವ “ಜನತೆ ಸೇವಾ ಟ್ರಸ್ಟ್” ಇಂದು
![Janathe seva trust](https://www.janathe.com/wp-content/uploads/2020/03/20200326_221543-min-400x179.jpg)
ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ಕೊರಗರ ಕಾಲನಿಯಲ್ಲಿ ಆಹಾರ ವಿತರಣೆ
ಪುತ್ತೂರು ತಾಲೂಕಿನ ಸಾಲ್ಮರ, ಪುತ್ತೂರು ಕಸಬಾ, ಕೆಮ್ಮಾಯಿ, ಮತ್ತು ಬೆಳ್ಳಿಪ್ಪಾಡಿ ಗ್ರಾಮದ ಸುಮಾರು 11 ಬಡ ಕಾರ್ಮಿಕ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡಿ ಬಡವರ ಹಸಿವು ನೀಗಿಸುವ ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಮದ ಗ್ರಾಮ ಕಾರಣೀಕರಾದ ಶ್ರೀ ಚಂದ್ರ ನಾಯಕ್ ರವರು ಜನರಿಗೆ ಕೊರೋನಾ ವೈರಸ್ ಹರಡುವ ಬಗ್ಗೆ ಮತ್ತು ಹರಡದಂತೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಜನರಿಗೆ ತಿಳಿಯಪಡಿಸಿದರು.
![Janathe seva trust](https://www.janathe.com/wp-content/uploads/2020/03/IMG-20200326-WA0020-400x181.jpg)
ಕೆಮ್ಮಾಯಿ ಸಮೀಪ ಆಹಾರ ಪದಾರ್ಥಗಳ ವಿತರಣೆ
ಆಹಾರ ಪದಾರ್ಥಗಳನ್ನು ವಿತರಿಸುವ ಸಂದರ್ಭದಲ್ಲಿ ಜನತೆ ಸೇವಾ ಟ್ರಸ್ಟ್ ನ ಪ್ರಮುಖರಾದ ಜಗದೀಶ್ ಕಜೆ, ನಿಶಾದ್ ಡಿ ಕೆ, ತೇಜ ಕುಮಾರ್, ಮತ್ತು ಸ್ಥಳೀಯ ನಿವಾಸಿಗಳಾದ ಬಾತೀಶ್, ಉಬೈದ್, ರಶೀದ್ ಉಪಸ್ಥಿತರಿದ್ದರು.