ಕೆಪಿಸಿಸಿ ನೂತನ ಹೆಚ್ಚುವರಿ ವಿಶ್ಲೇಷಕರಾಗಿ ಯುವ ವಾಗ್ಮಿ ಸುಧೀರ್ ಕುಮಾರ್ ಮರೋಳಿ ಆಯ್ಕೆ
ಬೆಂಗಳೂರು : (ಜ.16) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಹೆಚ್ಚುವರಿ ವಿಶ್ಲೇಷಕರಾಗಿ ಯುವ ವಾಗ್ಮಿ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಕರಾವಳಿ ಜಿಲ್ಲೆಯಾದ್ಯಂತ ತನ್ನ ವಾಕ್ ಚಾತುರ್ಯದಿಂದ ಮನೆ ಮನಗಳಲ್ಲಿ ಅಭಿಮಾನಿಗಳ ಪಡೆಯನ್ನೆ ತನ್ನತ್ತ ಸೆಳೆಯುವ ಚಿಕ್ಕಮಗಳೂರು ಜಿಲ್ಲಾ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ
ಶ್ರೀ ಸುಧೀರ್ ಕುಮಾರ್ ಮರೋಳಿಯನ್ನು ಕೆಪಿಸಿಸಿ ರಾಜ್ಯ ಮಾಧ್ಯಮ ಮತ್ತು ಸಂವಹನ ವಿಭಾಗದ ರಾಜ್ಯಧ್ಯಕ್ಷರಾದ ಶ್ರೀ ವಿ. ಎಸ್. ಉಗ್ರಪ್ಪ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸುದೀರ್ ಕುಮಾರ್ ಜೊತೆ ರವಿ ಕುಮಾರ್, ಇರ್ಷಾದ್ ಅಹ್ಮದ್ ಶೇಖ್, ವಿಜಯ ಕುಮಾರ್ ಚಿತ್ರದುರ್ಗ, ಯುವ ಕಾಂಗ್ರೆಸ್ ರಾಜ್ಯ ಘಟಕದ ಸ್ವಾತಿ ಮಳಗಿ, ಶ್ರೀಮತಿ ಶಿವಕಾಂತಮ್ಮ ವಿಜಯ ಕುಮಾರ್ ಚಿತ್ರದುರ್ಗ, ಇವರೆಲ್ಲರನ್ನೂ ತಕ್ಷಣಕ್ಕೆ ಜಾರಿಯಾಗುಂತೆ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.