ಮಠಂತಬೆಟ್ಟು ಮಹಿಷಮರ್ದಿನಿ ಬ್ರಹ್ಮಕಲಶ ಸಾಂಸ್ಕೃತಿಕ ಸ್ಪರ್ಧೆಗೆ ಶೈಕ್ಷಣಿಕ ಸಂಸ್ಥೆಗಳಿಗೆ ಆಹ್ವಾನ
ಪುತ್ತೂರು : (ಜ.09) ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಏಪ್ರಿಲ್ 21 ರಿಂದ ಏಪ್ರಿಲ್ 26ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ನಡೆಯುವ ಆಹ್ವಾನಿತ ಕಾಲೇಜು ವಿಧ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗೆ ಭಾಗವಹಿಸಲು ಮನವಿ ಪತ್ರವನ್ನು ಮಂಗಳೂರಿನ ಶ್ರೀನಿವಾಸ್ ತಾಂತ್ರಿಕ ಶಿಕ್ಷಣ ಸಂಸ್ಥೆ, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಕರಾವಳಿ ತಾಂತ್ರಿಕ ಶಿಕ್ಷಣ ಸಂಸ್ಥೆ, ಶ್ರೀದೇವಿ ತಾಂತ್ರಿಕ ಶಿಕ್ಷಣ ಸಂಸ್ಥೆ ಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿ ಪದಾಧಿಕಾರಿಗಳಾದ ಶ್ರೀಮತಿ ಸುಮ ಅಶೋಕ್ ಕುಮಾರ್ ರೈ, ನಿಹಾಲ್ ಪಿ. ಶೆಟ್ಟಿ , ಶ್ರೀಮತಿ ರಶ್ಮಿ ನಿರಂಜನ್ ರೈ ಮಠಂತಬೆಟ್ಟು, ರೇಣುಕಾ ಎಂ.ರೈ, ಮಮತ ಜಿ. ಶೆಟ್ಟಿ, ಭವ್ಯ ಡಿ. ಶೆಟ್ಟಿ, ಅನುಶ್ ರೈ ಉಪಸ್ಥಿತರಿದ್ದರು.
TAGS brahmakalashacollegecompetitionculturalengineeringinviteMattantabettu mahishamardinishahyadrist aloysiousteamvisited